ಸ್ವಾಗತ

ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ

ಹಾಗೂ

ಶ್ರೀ ಮಹಿಷಮರ್ದಿನಿ ಅಮ್ಮನವರ ಸನ್ನಿಧಿ

ಭಕ್ತಾದಿಗಳಿಗೆ ದಿವ್ಯವಾದ ನೆಲೆ

ಶ್ರೀ ಮಹಾಲಿಂಗೇಶ್ವರ ಪುನಃ ಪ್ರತಿಷ್ಠೆ

ಬ್ರಹ್ಮಕಲಶೋತ್ಸವ

ದಿನಾಂಕ ಏಪ್ರಿಲ್ ೨೭ ರಿಂದ ಮೇ ೧೧ ರ ವರೆಗೆ

ಆಮಂತ್ರಣ ಪತ್ರಿಕೆ

ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸ್ವಾಗತ

ಕರಾವಳಿ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾದ ಉಡುಪಿ ನೂರಾರು ದೇವಾಲಯಗಳ ತವರೂರು. ಈ ಕ್ಷೇತ್ರದ ಸುತ್ತ ಹತ್ತಾರು ಕಿ.ಮೀ. ವ್ಯಾಪ್ತಿಯಲ್ಲಿ ಅನೇಕ ಪ್ರಾಚೀನ ದೇವಾಲಯಗಳಿವೆ. ಅವುಗಳಲ್ಲಿ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯವೂ ಒಂದು.

ಸ್ಥಳ ಪುರಾಣ

ಹಿಂದೆ ಖರಾಸುರನೆಂಬ ರಾಕ್ಷಸನು ತನ್ನ ಇಷ್ಟಾರ್ಥ ಸಿದ್ದಿಗಾಗಿ ಋಷಿಗಳ ತಪೋಭೂಮಿಯಂತಿರುವ ಈ ಪ್ರದೇಶದಲ್ಲಿ ಶಿವನನ್ನು ಪ್ರತಿಷ್ಠಾಪಿಸಿದನು ಎನ್ನುವುದು ಐತಿಹ್ಯ. ಇಲ್ಲಿನ ಸ್ಥಳ ಪುರಾಣ ಸಹ ಇದನ್ನೇ ಹೇಳುತ್ತದೆ.

ಪರಿಸರದ ಸಾಕ್ಷಾಧಾರಗಳಿಂದ, ಈ ದೇವಾಲಯವು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪುರಾತನವಾದುದು ಎಂದು ಇತಿಹಾಸ ತಜ್ಞರು ಊಹಿಸಿದ್ದಾರೆ. ಇಷ್ಟೊಂದು ಪ್ರಾಚೀನ ದೇವಾಲಯಕ್ಕೆ ಭಕ್ತಜನರ ನೆರವೇ ಪ್ರಧಾನ ಆಸ್ತಿ. ಕಾಲಕಾಲಕ್ಕೆ ಮಹಾಜನರ ನೆರವಿನ ಮಹಾಪೂರ ಇತ್ತ ಹರಿದು ಬಂದುದರಿಂದ ದೇಗುಲದ ಆಂಗೋಪಾಂಗಗಳು ಜೀರ್ಣೋಧ್ಧಾರಗೊಳ್ಳುತ್ತಾ ಬಂದಿವೆ. ನಿತ್ಯ, ನೈಮಿತ್ತಿಕ ಪೂಜೆ, ಉತ್ಸವಾದಿಗಳು ನಡೆಯುತ್ತಾ ಬಂದಿವೆ.

ಒಂದು ಕಾಲದಲ್ಲಿ ತೀರ ಜೀರ್ಣಾವಸ್ಥೆಯಲ್ಲಿದ್ದ ಈ ದೇಗುಲದ ಹಿಂದಿನ ಆಡಳಿತ ಮಂಡಳಿಯ ಮೊಕ್ತೇಸರರಾದ ದಿ. ಗುರುರಾಜ ಜೋಯಿಸರ ಅವಿರತ ಪ್ರಯತ್ನದಿಂದ ಬ್ರಹಾದ್ಗತ್ರದಲ್ಲಿ ಬೆಳೆದು ನಿಂತಿದೆ. ಕ್ಷೇತ್ರ ಸ್ವಾಮಿಯಾದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರು ಮತ್ತು ಪರಿವಾರ ದೇವರುಗಳು ನಂಬಿದ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾ ಲೋಕರಕ್ಷಕರಾಗಿ ವಿರಾಜಮಾನರಾಗಿದ್ದಾರೆ.

ಸ್ಥಳ ಪುರಾಣ

ಅಭಿವೃದ್ಧಿ ಯೋಜನೆಗಳು

ಸಾವಿರಾರು ಮಂದಿ ಭಕ್ತಮಹಾಜನರ ಶ್ರದ್ಧಾ ಕೇಂದ್ರವಾದ ಈ ಭವ್ಯ ದೇಗುಲವನ್ನು ಇದೀಗ ಮತ್ತೊಮ್ಮೆ ಜೀರ್ಣೋದ್ಧಾರಗೊಳಿಸಬೇಕಾಗಿದೆ. ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿ ಹಾಗು ಗ್ರಾಮಸ್ಥರು ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಿ ಕಾರ್ಯೋನ್ಮುಖರಾಗಿದ್ದೇವೆ. ತತ್ಸಂಬಂಧ ಸುಮಾರು ಐದು ಕೋಟಿ ರೂಪಾಯಿಗಳಿಗಿಂತಲೂ ಅಧಿಕ ವೆಚ್ಚದ ವಿವಿಧ ಯೋಜನೆಗಳನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ತರಲು ಕಾರ್ಯಕ್ರಮ ಹಮ್ಮಿಕೊಂಡು ಕೆಲಸ ಪ್ರಾರಂಭವಾಗಿದೆ. ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ.

ಊರ ಪರಊರ ಭಕ್ತಜನರ ಔಧಾರ್ಯಭರಿತ ದೇಣಿಗೆಯಿಂದಷ್ಟೇ ಇಂತ ಸಮಗ್ರ ಯೋಜನೆ ಸಂಪನ್ನಗೊಳ್ಳಬೇಕಾಗಿದೆ. ಶ್ರೀ ದೇವಾಲಯದ ನವನಿರ್ಮಾಣ ಕೈಂಕರ್ಯದಲ್ಲಿ ಭಕ್ತ ಜನರೆಲ್ಲಾ ಪಾಲ್ಗೊಳ್ಳಬೇಕೆಂದು ನಮ್ಮೆಲ್ಲರ ಅಪೇಕ್ಷೆ. ಈ ಯೋಜನೆಗಳು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಹಾಗು ಶ್ರೀ ಮಹಿಷಮರ್ದಿನಿ ದೇವರ ಸೇವೆ. ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಮಹತ್ಕಾರ್ಯಕ್ಕೆ ತನು-ಮನ-ಧನದ ನೆರವನ್ನಿತ್ತು ಶ್ರೀ ದೇವರ ಅನುಗ್ರಹಕ್ಕೆ ಪ್ರಾತ್ರರಾಗಬೇಕೆಂದು ವಿನಂತಿಸುತ್ತೇವೆ.

ತಮ್ಮ ಉದಾರ ದೇಣಿಗೆಯನ್ನು ಕೆಳಕಂಡ ಖಾತೆಗೆ ವರ್ಗಾಯಿಸಬಹುದು.

ದೇವಸ್ಥಾನದ ನೀಲನಕಾಶೆ

ಉದ್ದೇಶಿತ ಯೋಜನೆಗಳು

  • ಶಿಲಾಮಯ ಗರ್ಭಗುಡಿ
  • ಹೆಬ್ಬಾಗಿಲು ಕಟ್ಟಡ ಮತ್ತು ಸೇವಾ ಕಾರ್ಯಾಲಯ
  • ಅಯ್ಯಪ್ಪ ಸ್ವಾಮಿ ಸಾನಿಧ್ಯ (ಶಾಸ್ತಾವು)
  • ಹುಲಿಚಾಮುಂಡಿ ಗುಡಿ ನವೀಕರಣ
  • ಒಳಾಂಗಣದ ಶೇಷಭಾಗಕ್ಕೆ ತಗಡು ಚಪ್ಪರ
  • ಹೊರಾಂಗಣಕ್ಕೆ ಕಲ್ಲು ಚಪ್ಪಡಿ ಹಾಕಿಸುವುದು
  • ದೇಗುಲದ ಸುತ್ತು ಆವರಣ ಗೋಡೆ ನಿರ್ಮಾಣ
  • ಫುಷ್ಕರಿಣಿಯ ಸುತ್ತ ಹೂದೋಟ , ಪಾರ್ಕಿಂಗ್ ನಿರ್ಮಾಣ
  • ಬಾಗಿಲು ಬೊಬ್ಬರ್ಯ ಮತ್ತು ನಾಗಾಲಯ ಬಗ್ಗೆ
  • ಬ್ರಹ್ಮಕಲಶ ಹಾಗು ನವೀಕೃತ ದೇವಾಲಯದ ಪುನಃ ಪ್ರತಿಷ್ಠೆ ಹಾಗು ಧಾರ್ಮಿಕ ವಿಧಾನಗಳ ಬಗ್ಗೆ

ದೈವಿಕ ಉಪಸ್ಥಿತಿಯನ್ನು ಅನುಭವಿಸಿ

ದೇವರ ಸೇವೆ ಮಾಡಿ

ದೇಣಿಗೆ

Bank Details

Bank: Canara Bank
A/C Name: P M M GANAPATHI TEMPLE JEERNODHARA
A/C NO: 01612200029860
IFSC: CNRB0010161 BRANCH: PARKALA

Enter Name and Donation amount to get the QR code for the payment.

ಭೇಟಿ ನೀಡಿ

ದೇವರ ಆಶೀರ್ವಾದ ಪಡೆಯಿರಿ